Monday, December 27, 2010

ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ...


ಸಾಹಿತ್ಯ : ಜಯ೦ತ್ ಕಾಯ್ಕಿಣಿ
ಸ೦ಗೀತ : ಹರಿಕೃಷ್ಣ
ಗಾಯನ : ಅನುರಾಧ ಶ್ರೀರಾಮ್, ಉದಿತ್ ನಾರಾಯಣ್
ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ಹೆ :ನೆನಪಿನ ಜಾತ್ರೆಯಲಿ ಅಲಿದು ನಾ ಕನಸಿನ ಕನ್ನಡಿಯ ಕೊಳ್ಳಲೆ
ಗ೦:ನಿನ್ನಯ ದಾರಿಯಲಿ ಅಂದಿನ ಹೃದಯದ ಅಂಗಡಿಯ ತೆರೆಯಲೆ
ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ಹೆ :ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ
ಗ೦:ಮುಂಗೋಪವೇನು ನಿನ್ನ ಮೂಗುತಿಯೆ
ಹೆ :ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ
ಗ೦:ಚಂದ್ರನ ಕರೆದಿಲ್ಲಿ ದೋಸೆಯ ತಿನಿಸುವೆಯ
ಹೆ :ಹುಟ್ಟೊ ದಿಲ್ಲಿಯಲಿ ಮನಸ ತಲುಪೆವೆಯ
ಗ೦:ಓ ಕಳೆದು ಹೋಗಿರುವೆ ದಾರಿ ತಿಳಿಸುವೆಯ
ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ಗ೦:ಪ್ರೀತೀಗೆ ಯಾಕೆ ಈ ಉಪವಾಸ
ಹೆ :ಯಾತಕ್ಕು ಇರಲಿ ನಿನ್ನ ಸಹವಾಸ
ಗ೦:ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ
ಹೆ :ನೆನಪಿನ ಕೊಟ್ಟಿಗೆಗೆ ನಿನ್ನನ್ನೆ ನೂಕಿರುವೆ
ಗ೦:ನಂಬಿ ಕೆಟ್ಟಿರುವೆ ಏನು ಪರಿಹಾರ
ಹೆ :ನಿನಗೆ ಕಟ್ಟಿರುವೆ ಮನದ ಗಡಿಯಾರ
ಹೆ :ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಗ೦:ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ಹೆ :ನೆನಪಿನ ಜಾತ್ರೆಯಲಿ ಅಲಿದು ನಾ ಕನಸಿನ ಕನ್ನಡಿಯ ಕೊಳ್ಳಲೆ
ಗ೦:ನಿನ್ನಯ ದಾರಿಯಲಿ ಅಂದಿನ ಹೃದಯದ ಅಂಗಡಿಯ ತೆರೆಯಲೆ..

No comments:

Post a Comment