Friday, January 7, 2011

ಡೇಂಜರ್ 15ಟು 20 ಡೇಂಜರ್..

ಸಾಹಿತ್ಯ: ಉಪೇಂದ್ರ
ಸಂಗೀತ: ಸಾಧು ಕೋಕಿಲ
ಗಾಯನ: ರಾಜೇಶ್ ಕೃಷ್ಣನ್
ಡೇಂಜರ್ 15ಟು 20 ಡೇಂಜರ್
20ಟು 30 ಸೋಲ್‍ಜರ್
30ಟು 40 ಹಂಟರ್
40ಗೆ ನೀ ಬೆಗ್ಗರ್
50ಗೆ ಮೇಲ್ ಪಂಕ್ಚರ್
||ಡೇಂಜರ್||
ಹದಿನಾರೊರುಷ ಕಳೆದ್‍ಹೋಗುವುದು ಎಜುಕೇಷನ್ ಅನ್ನೋ ಜೈಲಿನಲಿ
ಇನ್ನೈದ್ ವರುಷ ಓಡೋಗುವುದೂ ಪ್ರೀತಿಪ್ರೇಮದ ಗುಂಗಿನಲೀ
ಮತ್ತೈದ್ ವರುಷ ಕೈಜಾರುವುದೂ ಕೆಲಸ ಹುಡುಕೋ ಗೋಳಿನಲಿ
ಇನ್ನುಳಿದೊರುಷ ಸವೆದೋಗುವುದು ಫ್ಯಾಮಿಲಿಯ ಜಂಜಾಟದಲೀ
ತಿರುಗೀ ನೋಡು ಹೋಗೋ ದಿನ, ನಿನಗೆ ಉಳಿವುದು ಮೂರೇ ದಿನಾ
ಈ ಸತ್ಯ ನಿನಗೆ ತಿಳಿಯೊ ದಿನ ನೀ ಕಟ್ಟುವೆ ಗಂಟು ಮೂಟೇನಾ..
ಹ ಹ... ಐ ಡೋಂಟ್ ಸೇ ನಾನ್‍ಸೆನ್ಸ್
||ಡೇಂಜರ್||
ವೇದಾಂತಗಳು ಸಿದ್ಧಾಂತಗಳೂ
ಯಾರೊ ಬೆರೆದಿಟ್ಟ ಕಟ್ಟುಕಥೆ
ಜೀವನದ ರಸ ಸವಿಯೋಕೆ
ನಿಮಗೆ ನಾನೇನೆ ದಂತಕಥೆ
ಭೂಮಿಯಲಿ ನಾ ಹುಟ್ಟಿದ್ದೇ ಬೇಕು ಅನ್ನೋದು ಪಡೆಯೋಕೆ
ಮಧುಮಂಚದಲಿ ಸಿಹಿ ಜೊತೆಗೂಡಿ ಕಹಿಯ ಸತ್ಯಾನ ಹಡೆಯೋಕೆ
ನನ್ನ ಹುಟ್ಟು ಗುಣ ಅದೆ ಅಹಂಕಾರ
ಈ ಭೂಪನಿಗೆ ಅದೆ ಅಲಂಕಾರ
ಇದ ಹೇಳುವುದು ನನ್ನ ಅಧಿಕಾರ
ಅದ ಕೇಳುವುದು ನಿಮ್ಮ ಗ್ರಹಚಾರ
ಹ ಹ... ಐ ಡೋಂಟ್ ಕೇರ್‍..
||ಡೇಂಜರ್||

ಹೂವೇ ಹೂವೇ ಹೂವೇ ಹೂವೇ [H.2.O]

ಸಾಹಿತ್ಯ: ಉಪೇಂದ್ರ
ಸಂಗೀತ: ಸಾಧು ಕೋಕಿಲ
ಗಾಯನ: ಕವಿತಾ ಸುಬ್ರಮಣ್ಯಂ
.**************-

ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ
ಹೂವೇ
ನಿನ್ನೀ ನಗುವಿಗೇ ಕಾರಣವೇನೇ
ಸೂರ್ಯನ ನಿಯಮಾನೇ..
ಓ...ಚಂದ್ರನ ನೆನಪೇನೇ.. {ಪಲ್ಲವಿ}
||ಹೂವೇ ಹೂವೇ||
ಆಭರಣದ ಅಂಗಡಿಗೇ ಹೋಗೋಣ ಗಿಳಿಮರಿಯೇ
ಮುದ್ದಾದ ಮೂಗಿಗೇ ಮೂಗುತಿ ಹಾಕುವೇ
ಸೀರೆಗಳ ಅಂಗಡಿಗೆ ಹೋಗೋಣ ಬಾ ನವಿಲೇ
ಸಿಂಗಾರ ಮಾಡಲೂ ನಿನ್ನಂತೇ ನನ್ನನೂ
ಮುಗಿಲೇ ಓ ಮುಗಿಲೇ
ಕೆನ್ನೆ ಕೆಂಪು ಏಕೇ
ನಿನ್ನಾ ನೋಡೋಕೇ ನಲ್ಲ ಬರುವನೇನೇ...
ಗಾಳಿ ಈ ತಂಪನೂ
ಕದ್ದೊಯ್ದೇ ಎಲ್ಲಿಗೇ ಕದ್ದೊಯ್ದೇ ಎಲ್ಲಿಗೇ
||ಹೂವೇ ಹೂವೇ||
ಎರವಲು ಕೊಡಿ ರೆಕ್ಕೆಗಳಾ
ಓ ನನ್ನ ಹಕ್ಕಿಗಳೇ
ನಾನೊಮ್ಮೇ ಬಾನಿಗೆ ಹಾರಾಡಬೇಕಿದೇ
ಓಹೋ...ಗಡಿಬಿಡಿಯಾ ಇರುವೆಗಳೇ
ಸಾಲಾಗಿ ಬನ್ನಿರೀ
ಒಬ್ಬಬ್ಬರಾಗಿಯೇ ಹೆಸರು ಹೇಳಿ ಹೋಗಿರಿ
ಜಿಂಕೆ ಓ ಜಿಂಕೆ
ನಿನ್ನ ಮೈಯಮೇಲೇ ಚುಕ್ಕಿ ಇಟ್ಟ ರಂಗೋಲೇ...
ಬೆಳದಿಂಗಳೂಟವಾ
ಬಡಿಸೋನೇ ಚಂದ್ರಮಾ...ಬಡಿಸು ಬಾ ಚಂದ್ರಮ
||ಹೂವೇ ಹೂವೇ||

ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ..

ಏನಿಲ್ಲ ಏನಿಲ್ಲ
ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ
ಸುಳ್ಳುಗಳೆಲ್ಲ ನಿಜವಲ್ಲ
ಸುಳ್ಳಿನ ನಿಜವು ಸುಳ್ಳಲ್ಲ
ಏನಿಲ್ಲ ಏನಿಲ್ಲ ಏನೇನಿಲ್ಲ||ಪ||
ಕಳೆದ ದಿನಗಳಲೇನೂ ಇಲ್ಲ
ನೆನಪುಗಳಲಿ ಏನೇನಿಲ್ಲ
ಉತ್ತರ ದಕ್ಷಿಣ ಸೇರಿಸೊದೆಂಬರೆ ನೀನಿಲ್ಲ
ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ
ಕೆದಕಿದರೆ ಏನೇನಿಲ್ಲ ||೧||
ಮನಸಿನೊಳಗೆ ಖಾಲಿ ಖಾಲಿ
ನೀ ಮನದೊಳಗೆ ಇದ್ದರೂ
ಮಲ್ಲಿಗೆ ಸಂಪಿಗೆ
ತರದೆ ಹೋದರೂ ನೀನನಗೆ
ಓ ನಲ್ಲ ನೀನಲ್ಲ
ಕರಿಮಣಿ ಮಾಲೀಕ ನೀನಲ್ಲ
ಕರಿಮಣಿ ಮಾಲೀಕ ನೀ....ನಲ್ಲ ||೨||

ಅವನಲ್ಲಿ ಇವಳಿಲ್ಲಿ ಮಾತಿಲ್ಲಾ ಕಥೆಯಿಲ್ಲಾ...

ಸಂಗೀತ: ಸಾಧು ಕೋಕಿಲ ಗಾಯಕ: ಎಲ್ ಎನ್ ಶಾಸ್ತ್ರಿ
*********** 


ಅವನಲ್ಲಿ ಇವಳಿಲ್ಲಿ
ಮಾತಿಲ್ಲಾ ಕಥೆಯಿಲ್ಲಾ
ಎದುರೆದುರು ಬಂದಾಗ
ಹೆದರ್ಹೆದರಿ ನಿಂತಾಗಾ
ಅಲ್ಲೆ ಆರಂಭ ಪ್ರೇಮ || ೨
ನೋಡಿ ನೋಡಿ
ಪ್ರೇಮವನು ಮಾಡೋದಲ್ಲಾ
ಮಾಡುತಲಿ ಹಾಡೋದಲ್ಲಾ
ಹಾಡಿನಲಿ ಹೇಳೋದಲ್ಲಾ
ಹೇಳುವುದ ಕೇಳೋದಲ್ಲಾ
ಕೇಳುತಲಿ ಕಲಿಯೋದಲ್ಲಾ
ಕಲಿತು ನೀ ಮಾಡೋದಲ್ಲಾ
ಮೌನವೇನೆ ಧ್ಯಾನವೇ ಪ್ರೇಮಾಆಆಆ
ಅವನಲ್ಲಿ ಇವಳಿಲ್ಲಿ .......
ನೀನೆ ಎಲ್ಲಾ ನೀನಿರದೆ ಬಾಳೇ ಇಲ್ಲಾ
ಅನ್ನುವುದು ಪ್ರೇಮಾ ಅಲ್ಲಾ
ಮರಗಳನ್ನು ಸುತ್ತೋದಲ್ಲಾ
ಕವನಗಳಾ ಗೀಚೋದಲ್ಲಾ
ನೆತ್ತರಲ್ಲಿ ಬರೆಯೋದಲ್ಲಾ
ವಿಷವನು ಕುಡಿಯೋದಲ್ಲಾ
ಮೌನವೇನೆ ಧ್ಯಾನವೇ ಪ್ರೇಮಾಆಆಆ
ಅವನಲ್ಲಿ ಇವಳಿಲ್ಲಿ .......

Sunday, January 2, 2011

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...

ಚಿತ್ರ: ಸಂಜು ವೆಡ್ಸ್ ಗೀತಾ
ಸಂಗೀತ: ಜಸ್ಸಿ ಗಿಫ್ಟ್
ಗಾಯಕ: ಸೋನು ನಿಗಮ್
ಸಾಹಿತ್ಯ : ಕವಿರಾಜ್ 
***********

-----

ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...
ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು ಕೊಡುಗೇ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...
ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ..
ನಿನ್ನ ಈ ಕಣ್ಣಲೀ ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೇ...
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...
ತಂಗಾಳಿಯಾಗೋ ಬಿರುಗಾಳಿಯಾಗೋ
ನೀ ಒಮ್ಮೆ ಬಂದು ನನ್ನ ಸೋಕಿ ಹೋಗು
ನಿನ್ನ ನೋಡದೇ... ಅಳುವೇ ಬರುತಿದೇ
ನಿನ್ನ ನಗುವಿಲ್ಲದೇ ಜಗ ನಿಂತಂತಿದೆ..
ನಿದಿರೆ ಬರದ ಕಣ್ಣಿಗೆ ಬಾರೆ ಹಗಲುಗನಸ ಹಾಗೆ
ಬಳಲಿ ಹೋದ ನನಗೆ ಬಾರೆ ಜೀವ ತುಂಬು ಹಾಗೆ
ಉಸಿರಾಡುವ ಶವವಾದೆ ನಾ... ನೀನು ಇಲ್ಲದೇ
ಮಳೆ ನಿಂತರೂ ಮರದಾ ಹನಿ ತರವೇ
ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೇ..
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...