ಚಿತ್ರ : ಮಳೆಯಲಿ ಜೊತೆಯಲಿ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಸಂಗೀತ : ವಿ. ಹರಿಕೃಷ್ಣ ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು ….ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರೂ ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು …ಹೇಳು ನೀನು..
ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನಾ ಬಿಟ್ಟು ಇಲ್ಲ ಜೀವ ಎಂದು ಕೂಡ ಒಂದು ಘಳಿಗೆ,
ನಿನ್ನಾ ಮಾತು ಏನೆ ಇರಲಿ ನಿನ್ನ ಮೌನ ನಂದೇ ಏನು
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನಾ ಬಿಟ್ಟು ಇಲ್ಲ ಜೀವ ಎಂದು ಕೂಡ ಒಂದು ಘಳಿಗೆ,
ನಿನ್ನಾ ಮಾತು ಏನೆ ಇರಲಿ ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು ….ನೀನೆ ಹೇಳು
ಹೇಳು ನೀನು ….ನೀನೆ ಹೇಳು
ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನಾ ನೆನಪು
ನಿನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಪ್ಪಿ ಕೊಳ್ಳೋ ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತಾ …ಉಳಿಸು ನನ್ನನು
ದಾರಿಯಲ್ಲಿ ಬುದ್ಧಿ ಹಿಡಿದು ನಿಂತ ಸಾಥಿ ನೀನೆ ಏನು
ನಿನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಪ್ಪಿ ಕೊಳ್ಳೋ ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತಾ …ಉಳಿಸು ನನ್ನನು
ದಾರಿಯಲ್ಲಿ ಬುದ್ಧಿ ಹಿಡಿದು ನಿಂತ ಸಾಥಿ ನೀನೆ ಏನು
ನೀ ಸನಿಹಕೆ ಬಂದರೆ ಹೃದಯದ ಗತಿ ಏನು
ಹೇಳು ನೀನು ….ನೀನೆ ಹೇಳು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು …ಹೇಳು ನೀನು..
ಹೇಳು ನೀನು ….ನೀನೆ ಹೇಳು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು …ಹೇಳು ನೀನು..
No comments:
Post a Comment